Tuesday, April 6, 2010

ಜೀವನ

ಕಾಣದೆ ಹೋದೆ ಜೀವನದ ಸತ್ವ ,
ಹುಡುಕಾಟದಲಿ  ನನ್ನ ಅಸ್ತಿತ್ವ ....

ಆಮಂತ್ರಣ ಬೇಕೇ ಹಾರಲು ಹಕ್ಕಿಗಳಿಗೆ ...
ಕಾರಣ ಬೇಕೇ ಈ ಮನಸ್ಸಿನ ಭಾವನೆಗಳಿಗೆ ......


ಬುದ್ಧಿಮಾಂದ್ಯ ಈ ಪುಟ್ಟ ಹೃದಯ ...
ಕಾಣುತಿದೆ ಸಾಧ್ಯವಾಗದ ಗುರಿಯ........

ಸಾಧಿಸಿಯೇ ತೀರುವೆ ಎನ್ನುತಿದೆ ಮನಸು ...
ಬಯಕೆಯಿದೆ ತೊಡಕಾಗದಿರಲಿ ವಯಸು ....


ಗೆದ್ದೇ ಗೆಲ್ಲುವೆ !!! ಗೆದ್ದಾಗ ಹಿಗ್ಗುವುದಿಲ್ಲ ....
ಸೋತರೆ ಕಾರಣ ನನ್ನ ಭಾವನೆಯಷ್ಟೇ ಬೇರಾರು ಅಲ್ಲ...
                                                        -ನಯನ

No comments:

Post a Comment