ಕಾಣದೆ ಹೋದೆ ಜೀವನದ ಸತ್ವ ,
ಹುಡುಕಾಟದಲಿ ನನ್ನ ಅಸ್ತಿತ್ವ ....
ಆಮಂತ್ರಣ ಬೇಕೇ ಹಾರಲು ಹಕ್ಕಿಗಳಿಗೆ ...
ಕಾರಣ ಬೇಕೇ ಈ ಮನಸ್ಸಿನ ಭಾವನೆಗಳಿಗೆ ......
ಬುದ್ಧಿಮಾಂದ್ಯ ಈ ಪುಟ್ಟ ಹೃದಯ ...
ಕಾಣುತಿದೆ ಸಾಧ್ಯವಾಗದ ಗುರಿಯ........
ಸಾಧಿಸಿಯೇ ತೀರುವೆ ಎನ್ನುತಿದೆ ಮನಸು ...
ಬಯಕೆಯಿದೆ ತೊಡಕಾಗದಿರಲಿ ವಯಸು ....
ಗೆದ್ದೇ ಗೆಲ್ಲುವೆ !!! ಗೆದ್ದಾಗ ಹಿಗ್ಗುವುದಿಲ್ಲ ....
ಸೋತರೆ ಕಾರಣ ನನ್ನ ಭಾವನೆಯಷ್ಟೇ ಬೇರಾರು ಅಲ್ಲ...
-ನಯನ
No comments:
Post a Comment